ಪೋಸ್ಟ್‌ಗಳು

ಬೈರಾಗಿಯ ಹಾಡು

ಇಮೇಜ್
 ಬೈರಾಗಿಯ ಹಾಡು “Nature is creative’ ನಿಸರ್ಗ ಸೃಜನಶೀಲವಾದದ್ದು ಎಂಬ ಮಾತಿದೆ. ಹೂ, ಹಣ್ಣು ಹಸಿರು ಎಲೆ, ಪಶುಪಕ್ಷಿ ಗೂಡು ನದಿ ಸಾಗರ ಇವೆಲ್ಲ ಮನುಷ್ಯನ ಅನಾದಿಕಾಲದ ಸವಿಗೆ ಸಡಗರಕ್ಕೆ ಸಂತೋಷಕ್ಕೆ ಲಾಸ್ಯಕ್ಕೆ ವಿಲಾಸವಾಗಿವೆ. ಮನುಷ್ಯನ ಸುತ್ತ ಕಾಡಿದೆ ಹಾಡಿದೆ ಹಕ್ಕಿಗಳ ಕಲರವವಿದೆ ಹೂಗಳ ಸುಗಂಧವಿದೆ. ಇವೆಲ್ಲ ತಮ್ಮ ಪಾಡಿಗೆ ತಾವು ತಮ್ಮ ತಮ್ಮ ಮನೋಧರ್ಮಕ್ಕೆ ಅರಳಿ ಬಾಳಿ ಆಯುಷ್ಯ ಮುಗಿದ ಮರುಕ್ಷಣ ಮರೆಯಾಗುತ್ತವೆ. ಅವ್ಯಾವುಗಳಿಗೂ ಇಂದಿನ ಆಡಂಬರವಿಲ್ಲ ನಾಳೆಯ ಭಯವಿಲ್ಲ, ತಾನು ಇಂದು ಬಾಳಿದ್ದಕ್ಕೆ ಗುರುತುಬಿಟ್ಟು ಹೋಗಬೇಕು ಎಂಬ ಬಯಕೆಯಿಲ್ಲ, ಆದರೆ ಇವೆಲ್ಲವುಗಳನ್ನು ಬಳಸಿ ಅನುಭವಿಸಿ ಆನಂದಿಸುವ ಮನುಷ್ಯನಿಗೆ ಮಾತ್ರ ಅಹಂಕಾರವಿದೆ ಆಡಂಬರವಿದೆ ತಾನು ಶಾಶ್ವತವಾಗಬೇಕೆಂಬ ಹೆಬ್ಬಯಕೆಯಿದೆ. ತನ್ನ ಹೆಸರು ತಾನು ಸತ್ತಮೇಲೂ ಉಳಿಯಬೇಕು ಎಂಬ ಹಂಬಲವಿದೆ, ಅದಕ್ಕಾಗಿ ಅವನು ಇನ್ನಿಲ್ಲದಂತೆ ಹಪಹಪಿಸುತ್ತಾನೆ, ಆದರೆ ನಿಸರ್ಗ ಮಾತ್ರ ನಿರಪೇಕ್ಪವಾಗಿ ನಿರ್ಲಿಪ್ತವಾಗಿ ಹೆಸರಿನ ಹಂಗಿಲ್ಲದೇ ತನ್ನ ಪಾಡಿಗೆ ತಾನು ಬಾಳಿ ಬಯಲಾಗಿ ಹೋಗುತ್ತದೆ.  ಇಂಥ ನಿಸರ್ಗವನ್ನು ಅದರ ಮೂಲ ಸ್ವರೂಪದಲ್ಲೇ ಅರಿಯುತ್ತಾ ತನ್ನೊಳಗಿನ ಅಹಮಿಕೆಯನ್ನು ಖಾಲಿಯಾಗಿಸಿಕೊಳ್ಳುವ ಕಾಣ್ಕೆಯಲ್ಲಿ ಹಿಗ್ಗುವ ಬೇಂದ್ರೆ ನಿಸರ್ಗವನ್ನೇ ಬೈರಾಗಿಯಾಗಿಸುತ್ತಾರೆ. ನಿಸರ್ಗದ ಅಂತರಂಗದಲ್ಲಿ ಸುಪ್ತವಾಗಿರುವ ಸ್ಥಿತಪ್ರಜ್ಞ ಪ್ರಶಾಂತ ರಸವನ್ನು ಕವಿ ತಮ್ಮ ಕಾವ್ಯದಲ್ಲಿ ದಾಖಲಿಸುತ್ತಾ, ಪ...

‘ಬೆಳಗು’ ಪದ್ಯದ ಒಂದು ನೋಟ

ಇಮೇಜ್
   ‘ಬೆಳಗು’ ಪದ್ಯದ ಒಂದು ನೋಟ “ನಾನು ಕಾವ್ಯ ಬರೆಯುವ ಕಾರಣ, ಕಾವ್ಯದ ಮುಖಾಂತರ ಒಳಗಿನ ಅಂಬಿಕಾತನಯನನ್ನು ಮುಟ್ಟುವುದಕ್ಕಾಗಿ ಬೇರಾವ ಉದ್ದೇಶಕ್ಕಾಗಿ ಅಲ್ಲ” “ಬೇಂದ್ರೆ ಬೇರೆ, ಕವಿ ಅಂಬಿಕಾತನಯದತ್ತ ಬೇರೆ” ಬೇಂದ್ರೆಯವರೇ ಹೇಳಿಕೊಂಡ ಈ ಸ್ವಗತ ಅವರ ವಿನೀತ ಭಾವವೋ, ತಮಗೇ ಹೊಳೆದ ಹೊನಲಿನ ಭಾಗ್ಯಕ್ಕೆ ಅವರಿಗೇ ಸಂಕೋಚವೋ ? ತಮ್ಮ ಭಾವ ಸಾಮ್ರಾಜ್ಯದಲ್ಲಿ ಯಾವುದೋ ಶಕ್ತಿಯನ್ನು ಆವಾಹಿಸಿಕೊಂಡು ಬರೆಯುವ ಮಹೋನ್ನತ ಆದರ್ಶವೋ? ಕೀರ್ತಿ ಮೋಹದ ವರ್ಜನೆಯೋ? ಗೊತ್ತಿಲ್ಲ . ಒಂದು ಶತಮಾನದ ತುಂಬ ವ್ಯಾಪಿಸಿದ, ಕಾಲದ ಗೆರೆದಾಟಿ ಸಾರ್ವಕಾಲಿಕವಾದ ಬೇಂದ್ರೆ ಕನ್ನಡ ಓದುಗರಿಗೆ ಕಾವ್ಯ ರಸಿಕತೆಯ ಪಾಠ ಮಾಡಿದ ಕವಿ. ಬದುಕಿನ ಉನ್ಮತ್ತ ಅಲೆಗಳ ನಡುವೆ ಈಸಿ, ಗಾಳಿಯಲ್ಲಿ ತೇಲಿ ಗಗನದಲ್ಲಿ ವಿಹರಿಸಿ ಗಮ್ಯ ಸೇರುವ ಸರಾಗ ದಾರಿಯಾದ ಕವಿ. ಓದುತ್ತಲೇ ಹಾಡಿಸಿಕೊಳ್ಳುವ ಕವಿತೆಗಳನ್ನು ಬರೆದ ಕವಿ. ಸಂಗೀತ ಸರಸಕ್ಕೆ ಸರಾಗವಾಗಿ ಸರಿಯುವ ಸಾಲುಗಳನ್ನು ಕೊಟ್ಟ ಕವಿ. ಭಾಷೆಯ ಹೆಗಲ ಮೇಲೆ ಕೈ ಹಾಕಿ ಗೆಳೆಯನ ಹಾಗೆ ಸಲಿಗೆಯಿಂದ ಹೊರಟ ಕವಿ. ಭೂಮಿ ಹೃದಯವನ್ನು ಮಾತಿನ ಬೊಗಸೆಯಲ್ಲಿ ಹಿಡಿದ ಕವಿ. ಬೇಂದ್ರೆ ಬಗೆದಷ್ಟೂ ಆಳ, ಹಿಗ್ಗಿಸಿದಷ್ಟೂ ವಿಸ್ತಾರ.  ಬೇಂದ್ರೆಯವರ ‘ಗರಿ’ ಕವನ ಸಂಕಲನದ ಮೊದಲನೆಯ ಪದ್ಯ “ಬೆಳಗು” 1918ರಿಂದ 1932ರ ನಡುವೆ ಬರೆದ ಪದ್ಯ  ಮೂಡಲ ಮನೆಯ ಮುತ್ತಿನ ನೀರಿನ  ಎರಕವಾ ಹೊಯ್ದಾ ನುಣ್ಣನ್ನೆರಕವಾ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದ...

‘ಪುಟ್ಟ ವಿಧವೆ’ ಒಂದು ಅಭಿಪ್ರಾಯ

ಇಮೇಜ್
  ‘ಪುಟ್ಟ ವಿಧವೆ’ ಒಂದು ಅಭಿಪ್ರಾಯ  ಕವಿ ಬೇಂದ್ರೆ ಬದುಕಿನ ಎಲ್ಲ ಎಲ್ಲೆಗಳಿಗೆ ಸ್ವಚ್ಛಂದವಾಗಿ ವಿಹರಿಸಿದವರು. ಮನುಷ್ಯ ಪ್ರಪಂಚದ ಘರ್ಷಣೆಯನ್ನು ಘನತೆಯನ್ನು ವಿವರಿಸುತ್ತಲೇ ಮನುಷ್ಯ ಸಂಬಂಧವನ್ನು ಸೂಕ್ಷ್ಮವಾಗಿ ಅವಲೋಕಿಸಿದವರು. ಅವರ ಬದುಕಿನ ಮೇಲೆ ವಿಧಿಯ ವಕ್ರನೋಟ ಬಿದ್ದರೂ ಆಂತರ್ಯದಲ್ಲಿ ಕಲ್ಲೋಲಗಳಿದ್ದರೂ ಓದುಗರಿಗೆ ಕಲ್ಲು ಸಕ್ಕರೆ ಕೊಟ್ಟವರು. ದೌರ್ಭಾಗ್ಯ ಬಂದು ಬಾಗಿಲಲ್ಲಿ ನಿಂತರೂ ಜಗತ್ತಿಗೆ ಸೌಭಾಗ್ಯ ಹಾರೈಸಿದವರು. ಯಾತನೆಗೆ, ವಿಷಾದಕ್ಕೆ, ಸಂಕಟಕ್ಕೆ ಅಚಲರಾದವರು.  ಬೇಂದ್ರೆಯವರ ‘ಸಖೀಗೀತ’ ಕವನ ಸಂಕಲನದಲ್ಲಿ ‘ಪುಟ್ಟ ವಿಧವೆ’ ಎಂಬ ಪದ್ಯವಿದೆ.  ಬಾಳಾಗ್ನಿಯಲ್ಲಿ ಬಿದ್ದು ಸುಟ್ಟು ಹೋದವಳ ಕಥೆ. ಎಳೆಯ ಬಾಳಲ್ಲೇ ಭಾರ ಹೊತ್ತವಳು. ಹೂ ಉದುರಿ ಬರಿದಾದ ಬಳ್ಳಿಯಾದವಳು. ವಿಧಿಯ ಕಠೋರ ಕಪಟಕ್ಕೆ ಸಿಕ್ಕಿದವಳು, ದುಃಖಾಲಾಪಾದ ಸ್ವರಸ್ವರವನ್ನು ಎಳೆದು ಎಳೆದು ತನ್ನೊಳಗೆ ತಾನೇ ಹಾಡಿಕೊಂಡವಳು. ಸಂತೋಷದ ನಶ್ವರ ಅವಧಿಯ ಪ್ರತಿನಿಧಿಯಾದವಳು.  ಪದ್ಯದ ಹೆಸರೇ ಸೂಚಿಸುವಂತೆ, ಅವಳು ಸಣ್ಣ ವಯಸ್ಸಿನಲ್ಲೇ ವಿಧವೆಯಾದವಳು. ಸಣ್ಣ ವಯಸ್ಸು ಸಾಗಿ ಮಾಗುವ ಮುನ್ನವೇ ದಾಂಪತ್ಯದ ಎಲ್ಲ ಫಲವನ್ನು ಪಡೆದುಕೊಂಡವಳು, ಮದುವೆ ಏನೆಂದು ಗೊತ್ತಾಗದ ವಯಸ್ಸಿನಲ್ಲಿಯೇ ಮದುವೆಯಾದವಳು. ಅವನೂ ಅಷ್ಟೇ. ಆಕೆಯಿದ್ದಳು ಕೂಸು ಈತನಿನ್ನೂ ಹುಡುಗ  ಅವರ ತಾಯ್ತಂದೆಗಳ ಹಿಗ್ಗು ಎಷ್ಟು !  ಧರ್ಮದಾ ಹೆಸರಿನಲ್ಲಿ ಅವರ ಕೈಕೊಡಿಸಲು  ಇವ...

ಅಮೇರಿಕಾ ಅಮೇರಿಕಾ - (ಪ್ರವಾಸ ಕಥನ)

ಇಮೇಜ್
 ಅಮೇರಿಕಾ ಅಮೇರಿಕಾ - ನಾಗತೀಹಳ್ಳಿ ಚಂದ್ರಶೇಖರ್ ನಾವು ಮನುಷ್ಯರು ಭಾವನಾ ಜೀವಿಗಳು, ಸಂಘಜೀವಿಗಳು. ಸುಖ ನೆಮ್ಮದಿಯ ವಾತಾವರಣವನ್ನು ಅರಸುತ್ತಾ ಸಾಗುವವರು. ನಮಗೆ ಬೇಸರವಾದರೆ  4  ದಿನ ಬಂಧುಗಳ ಮನೆಗೋ ,  ಸ್ನೇಹಿತರ ಮನೆಗೋ ಹೋಗಿ ಬರುವುದುಂಟು ಈ ರೀತಿಯ ಸ್ಥಳ ಬದಲಾವಣೆ ,  ಪರಿಸರ ಬದಲಾವಣೆ ವ್ಯಕ್ತಿಗೆ ಒಂದು ರೀತಿಯ ನವೀನ ಚೈತನ್ಯವನ್ನು ಕೊಡಬಲ್ಲದು. ಪುಸ್ತಕದಿಂದ ದೊರೆಯುವ ಜ್ಞಾನ ಸ್ವತಃ ದೇಶಗಳನ್ನು ಸುತ್ತಿ ಅರಿಯುವ ಜ್ಞಾನ ಸಮಾನವಾದವುಗಳು ಎನ್ನುವರು.  “ ದೇಶ ಸುತ್ತಿ ನೋಡು ಕೋಶ ಓದಿ ನೋಡು ”  ಎಂಬ ನಮ್ಮ ಹಿರಿಯರ ಅನುಭವದ ನುಡಿಯೇ ಪ್ರವಾಸದ ಮಹತ್ವವನ್ನು ತಿಳಿಸುತ್ತದೆ. ಹೀಗೆ ಒಂದು ಕಾಲಕ್ಕೆ ಮನೋರಂಜಕವಾಗಿ ಬೆಳೆದುಕೊಂಡು ಬಂದ ಪ್ರವಾಸವು ನಂತರ ಜ್ಞಾನ ಅಭಿಪ್ಸೆಯ ಹಿನ್ನಲೆಯಲ್ಲಿ ಬೆಳೆವಣಿಗೆ ಹೊಂದಿ ಇತ್ತೀಚೆಗೆ ವ್ಯಾಪಾರ ,  ವ್ಯವಹಾರ ಸಾಂಸ್ಕ ø ತಿಕ ವಿನಿಮಯಗಳ ಆಶಯಗಳನ್ನು ಹೊತ್ತು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಸೃಷ್ಟಿಯಾದ ಸಾಹಿತ್ಯವೇ ಪ್ರವಾಸ ಸಾಹಿತ್ಯ. ಯಾವುದೇ ಒಬ್ಬ ವ್ಯಕ್ತಿ ತನ್ನ ಪರಿಸರವನ್ನು ತೊರೆದು ಮತ್ತೊಂದು ಪರಿಸರಕ್ಕೆ ಹೋದಾಗ ಅಲ್ಲಾಗುವ ಅನುಭವಗಳನ್ನು ಅನುಭವಿಸಿ ಅರಗಿಸಿಕೊಂಡು ಆ ಸ್ಥಳಗಳ ವೈವಿಧ್ಯತೆಗಳನ್ನು ,  ಆನಂದಗಳನ್ನು ವ್ಯಜಿಸುವ ,  ಅಭಿವ್ಯಕ್ತಿಸುವ ,  ವಿವರಿಸುವ ಪ್ರಧಾನವೇ ಪ್ರವಾಸ ಕಥನ. ನಾನು ನನ್ನ ಬಾಲ್...

ಜೀವವಿಕಾಸ ಮತ್ತು ದಶಾವತಾರ

  ಜೀವವಿಕಾಸ  ಮತ್ತು ದಶಾವತಾರ 1858 ನೇ ವರ್ಷ ಇಂಗ್ಲೇಂಡಿನ ಒಬ್ಬ ಜೀವಶಾಸ್ತ್ರಜ್ಞನ ಒಂದು ಸಿದ್ಧಾಂತವು ಇಂಗ್ಲೇಂಡಿನ ಜನಗಳ ಅಷ್ಟೇ ಏಕೆ ಇಡೀ ಜಗತ್ತಿನ ಸಿದ್ಧಾಂತ, ನಂಬುಗೆಗಳನ್ನೆಲ್ಲಾ ತಲೆ ಕೆಳಗೆ ಮಾಡಿತು. ಜಗತ್ತಿನ ಮೇಲೆ ಜೀವಿಗಳು ಉದಿಸಿದ್ದು ಹೇಗೆ ?  ನಂತರ ಕಾಲಾನುಕ್ರಮದಲ್ಲಿ ಅವು ಹೇಗೆ ರೂಪು ಬದಲಿಸಿಕೊಂಡು ಬದಲಾಗುತ್ತಾ ಇಂದಿನ ಸ್ಥಿತಿಗೆ ಬಂದು ತಲುಪಿದವು ?  ಎಂಬುದು ಆ ಸಿದ್ಧಾಂತದ ತಿರುಳಾಗಿತ್ತು. ಅದುವೇ  ‘ ಜೀವ ವಿಕಾಸವಾದ ’.  ಅದನ್ನು ಪ್ರತಿಪಾದಿಸಿದವನು ಇಂಗ್ಲೇಂಡಿನ ಪ್ರಸಿದ್ದ ಜೀವಶಾಸ್ತ್ರಜ್ಞ  ‘ ಚಾರ್ಲ್ಸ್ ಡಾರ್ವಿನ್ ’.  ನಮಗೆಲ್ಲಾ ವಿಕಾಸವಾದದ ಪಾಠ ಮೊದಲಾಗುವುದೇ ಡಾರ್ವಿನ್ನನ ಆನ್ ದಿ ಆರಿಜಿನ್ ಆಫ್ ಸ್ಪೀಷಿಸ್ ಕೃತಿಯ ಮೂಲಕ. ಹರ್ ಮ್ಯಾಜೆಸ್ಟೀಸ್ ಸರ್ವಿಸ್ ಬೀಗಲ್ ಹಡಗಿನಲ್ಲಿ ಇಡೀ ಪ್ರಪಂಚ ಸುತ್ತುವ ಮೂಲಕ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜೀವ ವೈವಿಧ್ಯವನ್ನು ಕಂಡ ಡಾರ್ವಿನ್ ಅಚ್ಚರಿಗೊಂಡಿದ್ದನು. ಇದುವರೆಗೆ ಯಾವ ಗ್ರಂಥಗಳಲ್ಲೂ ಉಲ್ಲೇಖಿಸದ ಅನೇಕ ಜೀವಿಗಳು ಭೂಮಿಯ ಮೇಲೆ ವಾಸಿಸುತ್ತಿವೆಯೆಂದು ,  ಸೃಷ್ಟಿಯ ಅಗಾಧತೆ ಮಾನವನ ಆಲೋಚನೆಗೂ ಮೀರಿದ್ದೆಂದು ಅವನಿಗೆ ಅರಿವಾದಾಗ ಅದರ ಆಳವನ್ನು ಇನ್ನೂ ನೋಡುವ ಆಸೆ ಅವನಲ್ಲಿ  ಚಿಗುರಿತ್ತು. ಇದೆಲ್ಲದರ ಮಧ್ಯೆ ಅವನಿಗೆ ಇನ್ನೊಂದು ಪ್ರಶ್ನೆ ಕಾಡುತ್ತಿತು. ಅವನು ಕಾಲಿರಿಸಿದ ಪ್ರತಿ ಪ್ರದೇಶದಲ್ಲಿ ಅವನು ನೊ...

ಡಾಲ್ಮೆಟಿಯನ್ ಮತ್ತು ಕನ್ನಡ

  ಡಾಲ್ಮೆಟಿಯನ್ ಮತ್ತು ಕನ್ನಡ 10 ಜೂನ್ 1898 ರಂದು ಪ್ರಪಂಚದಿಂದ ಒಂದು ಭಾಷೆ ಕಣ್ಮರೆಯಾಗಿ ಹೋಯಿತು. ಅದುವೇ ಡಾಲ್ಮೆಟಿಯನ್ ಭಾಷೆ. ಆ ಭಾಷೆಯನ್ನು ಮಾತನಾಡಲು ಬಲ್ಲವನಾಗಿದ್ದ ಕೊನೆಯ ಒಬ್ಬೇ ಒಬ್ಬ ವ್ಯಕ್ತಿ Tuone Udaina ಎಂಬಾತ ಒಂದು ಗಣಿಯ ಕೆಲಸದಲ್ಲಿ ತೊಡಗಿರುವಾಗ ಅಪಘಾತವಾಗಿ ಮರಣಿಸಿದ. ಅಲ್ಲಿಗೆ ಆ ಭಾಷೆ ನಶಿಸಿಹೋದ ಭಾಷೆಗಳ ಪಟ್ಟಿಗೆ ಸೇರಿಹೋಯಿತು, ಮಾತ್ರವಲ್ಲ ಆ ಭಾಷೆಯೊಂದಿಗೆ ಸೇರಿಕೊಂಡಿದ್ದ ಜನಾಂಗ, ಪ್ರದೇಶ, ಇತಿಹಾಸ ಎಲ್ಲವೂ ಒಂದುರೀತಿಯಲ್ಲಿ ಅಸ್ಪಷ್ಟವಾಗಿ ಉಳಿದುಹೋಯಿತು.  ಇಂದಿನ ಯುರೋಪ್ ನ ಕ್ರೋಷಿಯ ದೇಶ ಮತ್ತು ಅದರ ಅಕ್ಕ ಪಕ್ಕ ಹಲವೆಡೆ ಈ ಭಾಷೆಯನ್ನು ಮಾತನಾಡಲಾಗುತ್ತಿತ್ತೆಂದು ಕೆಲವು ಭಾಷಾತಜ್ಞರ ಅಭಿಪ್ರಾಯ. ಆದರೆ ಆ ಭಾಷೆ ನಾಶವಾದಾಗ ಮುಂದೊಮ್ಮೆ ಅಂತಹುದೊಂದು ಭಾಷೆ ಇತ್ತೆಂಬ ಕುರುಹು ಕೂಡ ಸಿಗದೆ ಹೋಯಿತು. ಒಂದು ಭಾಷೆ ಅದಕ್ಕಂಟಿಕೊಂಡ ಜನಾಂಗ, ಇತಿಹಾಸ ಇವಕ್ಕೆಲ್ಲ ಕೊನೆಯ ಋಜುವಂತಿದ್ದ ಕೊಂಡಿಯೊಂದು ಕಳಚಿಹೋಗುವುದು ಎಂತಹ ದುರಂತ.?  ಇದನ್ನೆಲ್ಲಾ ಹೇಳುತ್ತಿರುವುದಾದರೂ ಯಾತಕ್ಕೆ ಎಂದರೆ ಪ್ರಸ್ತುತ ನಮ್ಮ ಕನ್ನಡ ಕೂಡ ಆ ಸ್ಥಿತಿಗೆ ದೂರ ಉಳಿದಿಲ್ಲ. ಇಂಗ್ಲಿಷ್, ಹಿಂದಿ, ತೆಲುಗುಗಳ ಹಾವಳಿಗೆ ಇಂದು ಕರ್ನಾಟಕದಲ್ಲಿ ಕನ್ನಡ ಮಾತಾನಡುವವರ ಸಂಖ್ಯೆಯೇ ಕಡಿಮೆಯಾಗುತ್ತಾ ಬರುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಕನ್ನಡಕ್ಕಿಂತ ತೆಲುಗು ಹಿಂದಿ ತಮಿಳುಗಳ ಧ್ವನಿಯೇ ಒಮ್ಮೊಮ್ಮೆ ಹೆಚ್ಚು. ಗಡಿ ಪ್ರದೇಶಗಳಲ್ಲಿ ಅವು ಯಾವ...